ಪುರಾತನ ಸಂಗೀತಕೆ ಪುರಂದರರು ತಂದೆಯಣ್ಣ
ಪೋಣಿಸಿದರು ಸ್ವರಗಳನ್ನ ಮುತ್ತಿನಂಥ ಪದಗಳನ್ನ
ನಿರತಸೇವೆಗೈದರಲ್ಲ ನಾಡ ಹಿರಿಯ ಕಬ್ಬಿಗರು
ಸತತಕಾಲ ದುಡಿದರಲ್ಲ ನುಡಿದುದಂತೆ ನಡೆದರು
ಮೌನದಿ ಕೃಷಿಗೈದರಣ್ಣ ಚಿತ್ರರಂಗ ಪುಟ್ಟಣ್ಣ
ವಿಶ್ವಖ್ಯಾತಿ ಪಡೆಯಿತಣ್ಣ ಕನ್ನಡ ಸಿನಿಮಾ ಬಣ್ಣ
ಜನರ ನಾಡಿ ಬಡಿತವರಿತು ಮಿಡಿದ ನಮ್ಮ ಸಾಹಿತಿಗಳು
ಸಾಂತ್ವನ ಸ್ಪೂರ್ತಿಯ ನೀಡುತ ಬರೆದರು ಸತ್ಕತೆಗಳು
ದ್ವೇಷಿಸದೆ ಪರಭಾಷೆಯನು ಬೆಳೆಸಿದರಿವರು ಕನ್ನಡವನು
ಸಕಲ ಭಾಷೆ ಸತ್ವ ಸವಿದು ಗಳಿಸಿದರಿವರು ಜ್ಞಾನವನು
ಅಂತಹುದೇ ಸತ್ಪಥವನು ಬಳಸುತ ಬೆಳೆಸುವ ಭಾಷೆಯ ಸಿರಿಯನ್ನು
ಅಭಿಮಾನವು ಈ ತಿಂಗಳಿಗಲ್ಲದೆ ತಿಳಿಯುವ ನಡೆಯಿರಿ ನುಡಿಯನ್ನು
No comments:
Post a Comment